ಮುಖ್ಯ ಪುಟ
ವಿಶೇಷ ಲೇಖನ
ಕನ್ನಡ ಅಕ್ಷರಮಾಲೆಯು ಬ್ರಾಹ್ಮಿ ಲಿಪಿಯಿಂದ ಬೆಳೆದು ಬಂದಿದೆ. ಇದನ್ನು ಸ್ವರಗಳು, ಅನುಸ್ವಾರ, ವಿಸರ್ಗ, ವ್ಯಂಜನಗಳು, ಅವರ್ಗೀಯ ವ್ಯಂಜನಗಳೆಂದು ವಿಭಾಗಿಸಲಾಗಿದೆ. ಕನ್ನಡ ಅಕ್ಷರಮಾಲೆಯನ್ನು ಕನ್ನಡ ವರ್ಣಮಾಲೆಯೆಂದು ಕರೆಯಲಾಗುತ್ತದೆ. ನಾವು ಮಾತನಾಡುವ ಮಾತುಗಳೆಲ್ಲ ವಾಕ್ಯ ವಾಕ್ಯಗಳಾಗಿರುತ್ತವೆ. ವಾಕ್ಯಗಳು ಪದಗಳಿಂದ ಕೂಡಿರುತ್ತವೆ. ಪದಗಳು ಅಕ್ಷರಗಳಿಂದ ಕೂಡಿರುತ್ತವೆ. ಉದಾಹರಣೆಗೆ, ನಾನು ಶಾಲೆಗೆ ಹೋಗಿ ಬರುವೆನು. ಈ ವಾಕ್ಯದಲ್ಲಿ ನಾನು, ಶಾಲೆಗೆ, ಹೋಗಿ, ಬರುವೆನು, ಹೀಗೆ ನಾಲ್ಕು ಪದಗಳಿವೆ. ಒಂದೊಂದು ಪದದಲ್ಲೂ ಹಲವು ಅಕ್ಷರಗಳಿವೆ. ನಾನು ಎಂಬ ಪದದಲ್ಲಿ ನ್+ಆ+ನ್+ಉ ಎಂಬ ಧ್ವನಿಮಾ ವ್ಯವಸ್ಥೆಯ ಬೇರೆ ಬೇರೆ ಅಕ್ಷರಗಳಿವೆ. ಹೀಗೆ ಕನ್ನಡ ಭಾಷೆಯನ್ನು ಮಾತನಾಡುವಾಗ ಬಳಸುವ ಅಕ್ಷರಗಳ ಮಾಲೆಗೆ ವರ್ಣಮಾಲೆ ಅಥವಾ ಅಕ್ಷರಮಾಲೆ ಎಂದು ಕರೆಯುತ್ತೇವೆ.
ನಮ್ಮ ಹೊಸ ಲೇಖನಗಳಿಂದ...
ಕನ್ನಡ ವಿಶ್ವಕೋಶದ ಸದಸ್ಯರಿಂದ ರಚಿಸಲ್ಪಟ್ಟ ಹೊಸ ಲೇಖನಗಳಿಂದ ಕೆಲವು ಸ್ವಾರಸ್ಯಕರ ಸಂಗತಿಗಳು:
- ಶಶಿಕುಮಾರ್ (ನಟ) (ಜನನ ೨ ಡಿಸೆಂಬರ್ ೧೯೬೫) ಕನ್ನಡ ಚಲನಚಿತ್ರ ನಟ ಮತ್ತು ರಾಜಕಾರಣಿ. ತಮ್ಮ ಚಲನಚಿತ್ರ ಬದುಕಿನ ಉಚ್ಛ್ರಾಯ ಕಾಲದಲ್ಲಿ ಕನ್ನಡ ಚಿತ್ರರಂಗದ ಅತ್ಯಂತ ಸುಂದರವಾದ ನಟರಲ್ಲಿ ಒಬ್ಬರನ್ನಾಗಿ ಶಶಿಕುಮಾರ್ ಅವರನ್ನು ಪರಿಗಣಿಸಲಾಗುತ್ತದೆ(ಚಿತ್ರಿತ).
- ಕಪ್ಪು ಶಿಲೀಂಧ್ರ ಮ್ಯೂಕೋರ್ಮೈಕೋಸಿಸ್ (ಕಪ್ಪು ಶಿಲೀಂದ್ರ) ಎನ್ನುವುದು ಶಿಲೀಂದ್ರಗಳಿಂದ ಉಂಟಾಗುವ ಸೋಂಕು. ಸಾಮಾನ್ಯವಾಗಿ ಮಣ್ಣು, ಹಳೆಯ ಕಟ್ಟಡಗಳ ಮೇಲೆ ಒದ್ದೆಯಾದ ಗೋಡೆಗಳು ಇತ್ಯಾದಿಗಳಿಂದ ಈ ಸೋಂಕು ಹರಡುತ್ತದೆ.
- ಅಭಿನಂದನ್ ವರ್ಧಮಾನ್ ೨೦೧೯ರ ಫೆಬ್ರವರಿ ೨೬ರಂದು ಭಾರತೀಯ ವಾಯುಸೇನೆಯು ಬಾಲಕೋಟ್ ಭಯೋತ್ಪಾದಕ ಶಿಬಿರದ ಮೇಲೆ ನಡೆಸಿದ ವಾಯುದಾಳಿಗೆ ಪ್ರತಿಯಾಗಿ, ಭಾರತೀಯ ಸೇನಾನೆಲೆಗಳ ಮೇಲೆ ಪಾಕಿಸ್ತಾನದ ವಾಯುಸೇನೆಯು ೨೭ನೇ ಫೆಬ್ರವರಿ ೨೦೧೯ರಂದು ವಿಫಲ ದಾಳಿಯನ್ನು ನಡೆಸಿದ ಸಂದರ್ಭದಲ್ಲಿ, ಪಾಕ್ ಯುದ್ಧವಿಮಾನವನ್ನು ಅಟ್ಟಿಸಿಕೊಂಡು ಹೋಗಿ, ಪಾಕಿ ವಾಯುಸೇನೆಯ, ಅಮೇರಿಕಾ ನಿರ್ಮಿತ ಎಫ್- ೧೬ ವಿಮಾನವನ್ನು, ಮಿಗ್-೨೧ ಬೈಸನ್ ವಿಮಾನದ ಸಹಾಯದಿಂದ ಹೊಡೆದುರುಳಿಸಿದ ಸಾಹಸಿ ಸೈನಿಕ.
- ಕೊವ್ಯಾಕ್ಸಿನ್ (ಅಧೀಕೃತ ಹೆಸರು ಬಿಬಿವಿ೧೫೨) ಕೊರೊನಾ ವೈರಸ್ ಖಾಯಿಲೆಯ ಉಪಶಮನಕ್ಕಾಗಿ ನೀಡಲಾಗುವ ಒಂದು ಲಸಿಕೆ. ಇದನ್ನು, ನಿಷ್ಕ್ರಿಯಗೊಳಿಸಿದ ವೈರಸ್ಸಿನ ಸಹಾಯದಿಂದ ತಯಾರಿಸಲಾಗಿದ್ದು, ಭಾರತ್ ಬಯೋಟೆಕ್ ಸಂಸ್ಥೆಯು, ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಿದೆ.
- ಸಿಗಡಿ ಕೃಷಿ ಯು ಮನುಷ್ಯನ ಅಹಾರಕ್ಕಾಗಿ, ಜಲಚರಗಳನ್ನು ಸಾಕುವ ಉದ್ಯಮವಾಗಿದೆ. ಸಿಗಡಿ ಕೃಷಿಯು ಆಗ್ನೇಯ ಏಷಿಯಾದಲ್ಲಿ ಸಾಂಪ್ರದಾಯಿಕ ಸಣ್ಣ ಪ್ರಮಾಣದ ಉದ್ದಿಮೆಯಾಗಿ ಆರಂಭವಾಗಿ, ಇಂದು ಜಾಗತಿಕ ಉದ್ದಿಮೆಯೆನ್ನುವ ಮಟ್ಟಕ್ಕೆ ಬೆಳೆದಿದೆ.
ಸುದ್ದಿಯಲ್ಲಿ
- ಜನವರಿ ೦೬: ಹಾವೇರಿಯಲ್ಲಿ ೮೬ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ.[೧]
- ಡಿಸೆಂಬರ್ ೧೮: ಅರ್ಜೆಂಟೈನಾ ತಂಡ ವಿಶ್ವಕಪ್ ಫುಟ್ಬಾಲ್ ೨೦೨೨ ವಿಜೇತ.
- ನವೆಂಬರ್ ೨೦: ಖತಾರ್ ನಲ್ಲಿ ೨೨ನೆಯ ವಿಶ್ವಕಪ್ ಫುಟ್ಬಾಲ್ ಆರಂಭ.(ಚಿತ್ರಿತ)
- ನವೆಂಬರ್ ೧೯: ಮಂಗಳೂರುನಗರದ ಆಟೋ ಒಂದರಲ್ಲಿ ಕುಕ್ಕರ್ ಬಾಂಬ್ ಸ್ಫೋಟ. ಭಯೋತ್ಪಾದನೆ ಕೃತ್ಯ ಶಂಕೆ.[೨]
- ನವೆಂಬರ್ ೧೯: ಭಾರತದಲ್ಲಿ ಮೊಟ್ಟಮೊದಲ ಬಾರಿ ಖಾಸಗಿ ಕಂಪನಿ ತಯಾರಿಸಿದ ರಾಕೆಟ್ ವಿಕ್ರಮ್-ಎಸ್ ಉಡಾವಣೆ ಯಶಸ್ವಿ.
ಈ ತಿಂಗಳ ಪ್ರಮುಖ ದಿನಗಳು
ಜನವರಿ:
- ಜನವರಿ ೧: ಗ್ರೆಗೋರಿಯನ್ ಪಂಚಾಂಗದಲ್ಲಿ ವರ್ಷದ ಮೊದಲ ದಿನ.
- ಜನವರಿ ೩: ಸಾವಿತ್ರಿಬಾಯಿ ಫುಲೆ ಜನ್ಮದಿನ
- ಜನವರಿ ೧೦: ವಿಶ್ವ ನಗುವಿನ ದಿನ
- ಜನವರಿ ೧೨: ರಾಷ್ಟ್ರೀಯ ಯುವದಿನ
- ಜನವರಿ ೧೪: ಮಕರ ಸಂಕ್ರಾಂತಿ ಹಬ್ಬ ಆಚರಣೆ.
- ಜನವರಿ ೧೫: ಮಾರ್ಟಿನ್ ಲೂಥರ್ ಕಿಂಗ್ ಜನ್ಮದಿನಾಚರಣೆ, ಸೇನಾದಿನ
- ಜನವರಿ ೨೩: ದೇಶಪ್ರೇಮ ದಿನ
- ಜನವರಿ ೨೫: ಅಂತರಾಷ್ಟ್ರೀಯ ತೆರಿಗೆ ದಿನ
- ಜನವರಿ ೨೬: ಭಾರತದಲ್ಲಿ ಗಣರಾಜ್ಯೋತ್ಸವ (ಚಿತ್ರಿತ), ಪ್ರಜಾಪ್ರಭುತ್ವ ದಿನ
- ಜನವರಿ ೨೬: ಆಸ್ಟ್ರೇಲಿಯದಲ್ಲಿ ರಾಷ್ಟ್ರೀಯ ದಿನಾಚರಣೆ.
- ಜನವರಿ ೩೦: ಮಹಾತ್ಮ ಗಾಂಧಿ ಮರಣ ಹೊಂದಿದ ದಿನ. ಹುತಾತ್ಮ ದಿನಾಚರಣೆ, ಸರ್ವೋದಯ ದಿನ, ಕುಷ್ಠರೋಗ ನಿವಾರಣೆ ದಿನ
ವಿಕಿಪೀಡಿಯ ಪರ್ಯಟನೆ
ಭಾರತದ ಇತರ ನುಡಿಗಳಲ್ಲಿ ವಿಕಿಪೀಡಿಯ
-
- অসমীয়া (ಅಸ್ಸಾಮಿ)
- भोजपुरी (ಭೋಜಪುರಿ)
- বাংলা (ಬಂಗಾಳಿ)
- বিষ্ণুপ্রিয়া মণিপুরী (ವಿಷ್ಣುಪ್ರಿಯಾ ಮಣಿಪುರಿ)
- ދިވެހި (ದಿವೇಹಿ)
- سنڌي (ಸಿಂಧಿ)
- తెలుగు (ತೆಲುಗು)
- ગુજરાતી (ಗುಜರಾತಿ)
- हिन्दी (ಹಿಂದಿ)
- कश्मीरी (ಕಾಶ್ಮೀರಿ)
- മലയാളം (ಮಲೆಯಾಳ)
- मराठी (ಮರಾಠಿ)
- नेपाली (ನೇಪಾಳಿ)
- ଓଡ଼ିଆ (ಒರಿಯಾ)
- ਪੰਜਾਬੀ (ಪಂಜಾಬಿ)
- Pāḷi (ಪಾಳಿ)
- संस्कृत (ಸಂಸ್ಕೃತ)
- தமிழ் (ತಮಿಳು)
- دو (ಉರ್ದು)
- ತುಳು
- ಕೊಂಕಣಿ
- ᱥᱟᱱᱛᱟᱲᱤ (ಸಂತಾಲಿ)
ವಿಕಿಪೀಡಿಯ ಬಳಗದ ಇತರ ಯೋಜನೆಗಳು:
-
ಕಾಮನ್ಸ್
ಮಾಧ್ಯಮ ಭಂಡಾರ -
ಮೀಡಿಯಾವಿಕಿ
ವಿಕಿ ತಂತ್ರಾಂಶ ಅಭಿವೃದ್ಧಿ -
ಮೆಟಾವಿಕಿ
ವಿಕಿಮೀಡಿಯಾ ಸಂಯೋಜನೆ -
ವಿಕಿ ಬುಕ್ಸ್
ಉಚಿತ ಪಠ್ಯಪುಸ್ತಕಗಳು ಮತ್ತು ಕೈಪಿಡಿಗಳು -
ವಿಕಿಡಾಟ
ಉಚಿತ ಜ್ಞಾನದ ಮೂಲ -
ವಿಕಿನ್ಯೂಸ್
ಉಚಿತ ವಿಷಯ ಸುದ್ದಿ -
ವಿಕಿಕೋಟ್
ಉಲ್ಲೇಖಗಳ ಸಂಗ್ರಹ -
ವಿಕಿಸೋರ್ಸ್
ಉಚಿತ-ವಿಷಯ ಗ್ರಂಥಾಲಯ -
ವಿಕಿ ಸ್ಪೀಷೀಸ್
ಜೈವಿಕ ಮಾಹಿತಿ -
ವಿಕಿವರ್ಸಿಟಿ
ಉಚಿತ ಕಲಿಕೆಯ ಪರಿಕರಗಳು -
ವಿಕಿವಾಯೇಜ್
ಉಚಿತ ಪ್ರಯಾಣ ಮಾರ್ಗದರ್ಶಿ -
ವಿಕ್ಷನರಿ
ಶಬ್ದಕೋಶ