ಸಂಕಟ

ರಥ, ಹರಿದಂತೆ ಈ ಬಾಳು
ಸರಿಯಾಗಿದ್ದರೆ ಮಾತ್ರ ಚೆಂದ, ಆನಂದ
ಸರಿ ತಪ್ಪಿದರೆ ಕೆಡುವುದು ಎಲ್ಲಾ ಅಂದ

ಹೋಗುವವೆ ಒಳ್ಳೆ ಕಾಲ
ಬರುವವೆ ಕೆಟ್ಟ ಕಾಲ
ನಮ್ಮದೂ ಒಂದು ಕಾಲಾನಾ?

ಏನು ಹೇಳಲಿ ಅಂದಿನ ವೈಭವವಾ-
ಎಲ್ಲಾ ಕೈ ನೀಡಿದಂಗಿತ್ತು
ಎತ್ತ ನೋಡಿದರು ಊರು ಕಾಲು ಕಟ್ಟಿದಂಗೆ ನಮ್ಮ
ಜಮೀನು ಕಾಣಿಗಳೆ

ಎಂಟಾರಿನ ಬೇಸಾಯ
ಕೈಗೊಬ್ಬ ಕಾಲಿಗೊಬ್ಬ ಅಳು
ಕುಡಿಯವಷ್ಟು ಕರೇವು
ಜೊತೆಗೆ ಗೌಡಿಕೆ ಬೇಕೆ
ಇನ್ನು ಕೇಳಬೇಕೆ!
ನಾಲ್ಕು ಜನರಿಗೆ ಬೇಕಾಗಿಬದುಕಿದರು ಹಿರಿಯರು

ನಮಗೆ ಊರು ಮನೆ ಏಕಪಥವಾಗಿತ್ತು
ತೋಳಿಂದ ಇಳಿಯಲಿಲ್ಲ-
ಮನೆಯವರು ತಪ್ಪ ಊರವರು
ಊರವರು ತಪ್ಪ ಮನೆಯವರು
ಆಡಿಸಿ ಬೆಳೆಸಿದರು

ಅದೆಲ್ಲಾ ಈಗ ಮುಗಿದ ಅಧ್ಯಾಯ!
ಹಿರಿಯರು ಹೋದರು
ಜೊತೆಗೆ ಎಲ್ಲವೂ ಹೋಯಿತು
ಪಾಂಡವರ ಬೀಳಾಗಿ ಹೋಯಿತು.

ಏನಾಯಿತೋ ಏನು ಕತೆಯೋ
ಭಗ್ಗನೆ ಬರಿದಾಯತು
ಮನೆ ಉಳಿಯಲಿಲ್ಲ
ವಂಶ ಬೆಳೆಯಲಿಲ್ಲ

ಯಾವ ಬಾಯಲ್ಲಿ ಹೇಳಲಿ
ಅತ್ತಿಗೆ ಹೋದ ಮೇಲೆ ಅಣ್ಣ ಕೆಟ್ಟು ಬಿಟ್ಟ
ಎಲ್ಲಾ ಮರೆತು ಬಿಟ್ಟ
ಮಕ್ಕಳು ಬೀದಿಗೆ ಬಿದ್ದವು
ಅನ್ಯರ ಮನೆಯ ಜಗುಲಿಯಾಯಿತು.
ಅವುಗಳಾಯಿತು
ಯಾರಿದ್ದು ಏನು ಬಂತು?
ಶಿವಾ ಇಷ್ಟು ಕಠೋರನಾಗಬಾರದಿತ್ತು

ಯಾರನ್ನಂದು ಏನು ಬರುವುದು?
ನಾವು ಬೇಡಿ ಬಂದಿದ್ದೇ ಇಷ್ಟು!
ಹಿಂದೆ ನಾವ್ಯಾರ ತೌರ ತೊರೆಸಿದ್ದೇವೊ…
ಯಾವ ಪಾಪಕ್ಕಾಗಿ ಈ ಶಿಕ್ಷೆಯೋ
ಬಲ್ಲವರಾರು?

ಎಲ್ಲರೂ ತವರೂರಿಗೆ ಹೋಗಿ
ಒಂದೆರಡು ದಿನವಿದ್ದು
ಕೈಯಾರಿಸಿ ಕೊಂಡು ಬರುವರು
ನಾವೆಲ್ಲಿಗೆ ಹೋಗುವುದು?
ನೆನೆಯದ ದಿನವಿಲ್ಲ
ಕೊರಗದ ಕ್ಷಣವಿಲ್ಲ
ಮರವೆಯಾಗದಲ್ಲ?

ಯಾರಾದರೂ ಸಿಕ್ಕಿ ಸುದ್ದಿ ಹೇಳಿದರೆ
ಆದಿನವೆಲ್ಲ ತುತ್ತುಮಿದ್ದರೆ ಮಗಳಲ್ಲ
ಏನು ಮಾಡುವುದು ಹೇಳಿ
ಎದೆ ಕೊಟ್ಟ ನಿಲ್ಲೋಣವೆಂದರೆ
ಇಲ್ಲೂ ಬಗೆ ಮಿಗಿಯಿಲ್ಲ.

ಕಂಡರೆ ಕಣ್ಣುರಿ
ಕಾಣದಿದ್ದರೆ ಹೊಟ್ಟೆಯುರಿ
ಈ ರೀತಿ ಯಾಗಿದೇ ರೀ ನನ್ನ ಸ್ಥಿತಿ
ಅದಕ್ಕೆ,
ಕಾಣದಂಗೆ ಕಣ್ಮರೆಯಲ್ಲಿರುವುದೊಂದೇ ನನಗುಳಿದಿರುವ ದಾರಿ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕೆಳಗೆ ಬಿದ್ದೆಯಾ ಮಗನೆ

ಸಣ್ಣ ಕತೆ

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

  • ಮಿಂಚು

    "ಸಾವಿತ್ರಿ, ಇದು ಏನು? ನನ್ನಾಣೆಯಾಗಿದೆ. ಹೀಗೆ ಮಾಡಬೇಡ! ಇದು ಒಳ್ಳೆಯದಲ್ಲ. ಬಿಡು, ಬಿಡು...! ನಾಲ್ಕು ಜನ ನೋಡಿದರೆ ಏನು ಅಂದಾರು?" ಅನ್ನಲಿ ಏನೇ ಅನ್ನಲಿ ನಾನು ಯಾವ… Read more…

  • ಕನಸು ದಿಟವಾಯಿತು

    ಪ್ರಕರಣ ೨ ಸೂರ್ಯೋದಯವಾಯಿತು. ನಿತ್ಯ ಕರ್ಮಗಳನ್ನು ಮುಗಿಸಿಕೊಂಡು ಕಾಫಿ ಸೇವನೆಯನ್ನು ಮಾಡುತ್ತಾ ರಂಗಣ್ಣನು ಹೆಂಡತಿಗೆ ಕನಸಿನ ಸಮಾಚಾರವನ್ನು ತಿಳಿಸಿದನು. ಆಕೆ- ಸರಿ, ಇನ್ನು ಈ ಹುಚ್ಚೊಂದು ನಿಮಗೆ… Read more…

  • ಮನೆ “ಮಗಳು” ಗರ್ಭಿಣಿಯಾದಾಗ

    ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…