ನೂರು ವರ್ಷದ ನಂತರ

ಇಂದಿನಿಂದ ನೂರು ವರ್ಷದ ನಂತರ
ನನ್ನ ಕವಿತೆಯನ್ನು ಓದುವಾತ
ನೀನು ಯಾರು..
ಹೃದಯದ ಒಲವಿನ ಲತೆಯಲ್ಲಿ
ಚಿಗುರಿರುವ ವಸಂತದ ಬೆಳಗಿನ
ಸರಳವಾದ ಸಖ್ಯವನ್ನು
ನಿನಗೆ ಮುಟ್ಟಿಸಲು ಅನುವಾದದಲ್ಲಿ
ಹೂವಿನ ಗಂಧ
ಹಕ್ಕಿಯ ಹಾಡಿನ ಛಂದ
ಇಂದಿನ ಬಣ್ಣದ ಹೊಳಪು
ನೂರು ವರ್ಷದ ನಂತರ
ನಿನಗೆ ತಲಪ ಬಹುದೆ….
ಒಮ್ಮೆ ನಿನ್ನ ಬಾಲ್ಕನಿಯ
ದಕ್ಷಿಣ ಭಾಗದ ಕಿಟಕಿಯನು ತೆರೆದು
ಉದ್ದಕ್ಕೆ ಹರಡಿರುವ
ಬಯಲನು ನಿರುಕಿಸು
ದೀರ್ಘ ಖಯಾಲಿನಲ್ಲಿ ಮುಳುಗಿ
ಜಗದ ಹೃದಯ ತಂತುವನ್ನು ಮೀಂಟಲು
ದೂರದ ಯಾವುದೋ ಸಗ್ಗದಿಂದ
ತೇಲಿ ಬರುವ ಪರಮ ಸುಖದ
ಕುರಿತು ಯೋಚಿಸು,
ನೂರು ವರ್ಷದ ನಂತರ
ತರುಣ ವಸಂತದ ದಿನದ
ಸ್ವಚ್ಛಂದ ಉತ್ಸಾಹ, ಗಲಭೆ
ಮತ್ತು
ಅರಳಿದ ಹೂವಿನ ಮತ್ತ ಕಂಪನ್ನು
ರೆಕ್ಕೆಗಳಲ್ಲಿ ಹೊತ್ತು
ಭೂಮಿಯನ್ನು ಬಣ್ಣಗೊಳಿಸಲು
ಮುನ್ನುಗ್ಗುವ ಮಲಯಾನಿಲದ
ಸುಕುಮಾರ ಸ್ಪಂದನವನ್ನು
ನೂರು ವರ್ಷದ ಮೊದಲು
ಇಂದೆ ಯೋಚಿಸು.

ಜ್ವಲಂತ ಹೃದಯದ ಹಾಡಿನಲ್ಲಿ
ತನ್ನನ್ನು ಸಂಪೂರ್ಣ ಹುದುಗಿಸಿ
ಹೂವು ಅರಳುವಂತೆ
ಕವಿ
ತನ್ನ ಮಧುರ ಪ್ರೇಮದ ಸೊತ್ತನ್ನು
ನೂರು ವರ್ಷದ ಮೊದಲ
ಒಂದು ಮುಂಜಾವಿನಲಿ
ಹಾಡಿದಂತೆ ಭ್ರಮಿಸು,
ಅದನ್ನೆ ನೂರು ವರ್ಷದ ನಂತರ
ಒಲವಿನಿಂದ ಹಾಡುವ
ಹೊಸ ಕವಿ ಯಾರು
ಅವನಿಗೆ ಹೊಸ ವಸಂತದ
ಶುಭ ಸಂದೇಶವನ್ನು
ನನ್ನ ಪರವಾಗಿ ಮುಟ್ಟಿಸು
ಎಲೆ ಕವಿಯೆ, ನನ್ನ ಹಾಡು
ನಿನ್ನ ಎದೆಯ ಬಡಿತದ ಜೊತೆಗೆ
ತುಂಬಿಯ ಗುಂಜನದಲ್ಲಿ
ಎಲೆಗಳ ಕಲರವದಲ್ಲಿ
ಅನುರಣಿಸಲಿ……
ನೂರು ವರ್ಷದ ನಂತರ!
*****
ಮೂಲ: ರವಿಂದ್ರನಾಥ ಠಾಗೋರ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಮ್ಮ ಮನೆಯ ಮಗಳು

ಸಣ್ಣ ಕತೆ

  • ವಿರೇಚನೆ

    ರವಿವಾರ ರಜವೆಂದು ರಾಮರಾವು ಶನಿವಾರ ರಾತ್ರಿಯೇ ಭೇದಿಗೆ ಔಷಧಿ ತೆಗೆದುಕೊಂಡ, ಕೆಲವು ತಿಂಗಳುಗಳಿಂದ ಊಟಕ್ಕೆ ರುಚಿಯಿಲ್ಲ. ತಿಂದದ್ದು ಜೀರ್ಣವಾಗುವುದಿಲ್ಲ. ರಾತ್ರಿ ನಿದ್ರೆ ಬರುವುದಿಲ್ಲ, ಹೊಟ್ಟೆ ಉಬ್ಬುತ್ತಿದೆ, ದೃಷ್ಟಿ… Read more…

  • ಆ ರಾತ್ರಿ

    ಆ ದಿನ ಮಧ್ಯಾಹ್ನ ವಸಂತನ ಮನೆಯಲ್ಲಿ ಬಹಳ ಗಡಿಬಿಡಿ! ವಸಂತ ತಾನು ಕೂಡುವ ಕೋಣೆಯನ್ನು ಅತ್ಯಂತ ಶಿಸ್ತಿನಿಂದ ಇಡುವ ಕಾರ್ಯದಲ್ಲಿ ಮಗ್ನನಾಗಿದ್ದನು. ಗಡಿಯಾರದ ಮುಳ್ಳುಗಳು ಎರಡು ಗಂಟೆಯಾದುದನ್ನು… Read more…

  • ಮಾದಿತನ

    ಮುಂಗೋಳಿ... ಕೂಗಿದ್ದೆ ತಡ, ಪೆರ್‍ಲಜ್ಜ ದಿಡಿಗ್ಗನೆದ್ದ. ರಾತ್ರಿಯೆಲ್ಲ... ವಂದೇ ಸಮ್ನೆ ಅಳುತ್ತಾ, ವುರೀಲೋ... ಬ್ಯಾಡೋ... ಯಂಬಂತೆ, ದೀಪದ ಬುಡ್ಡಿ, ನಡ್ಮುನೆ ಕಂಬ್ಕಂಟಿ, ಸಣ್ಗೆ ವುರಿತಿತ್ತು. ಯದೆವಳ್ಗೆ ಮಜ್ಗೆ… Read more…

  • ಸ್ವಯಂಪ್ರಕಾಶ

    ಇಸ್ತ್ರೀ ಇಲ್ಲದ ಸೀರೆ, ಬಾಚದ ತಲೆ... ಕೈಯಲ್ಲಿ ಚೀಲದ ತುಂಬ ತರ್ಕಾರಿಗಳೊಂದಿಗೆ ಮಾರುಕಟ್ಟೆಯಿಂದ ಹೊರಗೆ ಬರುವುದು ಭ್ರಮರೆ’ಯೇ... ಕಂಡು ತುಂಬಾ ಆಶ್ಚರ್ಯವಾಯಿತು. ರೋಡಿನ ಈ ಕಡೆ ಕಾರು… Read more…

  • ತಿಮ್ಮರಯಪ್ಪನ ಕಥೆ

    ರಂಗಣ್ಣ ಎರಡು ತಿಂಗಳು ಕಾಲ ರಜ ತೆಗೆದು ಕೊಂಡು ಬೆಂಗಳೂರಿಗೆ ಬಂದು ವಾಸಮಾಡುತ್ತಿದ್ದನು. ಶಿವಮೊಗ್ಗದಲ್ಲಿ ಪಿತ್ತವೇರಿಸುವ ತುಂಗಾಪಾನವನ್ನು ನಿತ್ಯವೂ ಮಾಡಿ, ಕಿವಿ ಮೂಗು ಬಾಯಿಗಳಿಗೆಲ್ಲ ಮುಸುರುವ ಸೊಳ್ಳೆಗಳ… Read more…