ಚಿಂತಾಮಣಿ ವಿಧಾನಸಭೆ ಕ್ಷೇತ್ರದ ಕೈವಾರದಲ್ಲಿ ಪಂಚರತ್ನ ರಥಯಾತ್ರೆಯ ರೋಡ್ ಶೋ ನಡೆಸಿದೆ. ಜನರ ಅಮೋಘ ಬೆಂಬಲ ಕಂಡು ಚಕಿತನಾದೆ. ಈ ಮಹಾಜನತೆಗೆ ನಾನು ಚಿರಋಣಿ.
ಚಿಂತಾಮಣಿ ಕ್ಷೇತ್ರದ ಶಾಸಕ ಎಂ.ಕೃಷ್ಣಾರೆಡ್ಡಿ ಜತೆಯಲ್ಲಿದ್ದರು.
#ಪಂಚರತ್ನ_ರಥಯಾತ್ರೆ#Pancharatna_Rathayatre#ಚಿಕ್ಕಬಳ್ಳಾಪುರ
ಚಿಂತಾಮಣಿ ವಿಧಾನಸಭೆ ಕ್ಷೇತ್ರದಲ್ಲಿರುವ ಕೈವಾರ ಪುಣ್ಯಕ್ಷೇತ್ರದಲ್ಲಿ ತಮ್ಮ ತತ್ವಗಳ ಮೂಲಕ ಸಮಾಜಕ್ಕೆ ದಿವ್ಯಬೆಳಕಾಗಿರುವ ಕಾಲಜ್ಞಾನಿಗಳಾದ ಶ್ರೀ ಶ್ರೀ ಶ್ರೀ ಕೈವಾರ ಯೋಗಿನಾರೇಯಣರಿಗೆ ಪೂಜೆ ಸಲ್ಲಿಸಲಾಯಿತು.
#ಪಂಚರತ್ನ_ರಥಯಾತ್ರೆ#Pancharatna_Rathayatre#ಚಿಕ್ಕಬಳ್ಳಾಪುರ
ಈ ಆಕ್ರೋಶದ ಹಿನ್ನೆಲೆಯಲ್ಲಿ ಮಾತನಾಡುವ ಭರದಲ್ಲಿ ಹಾಗೆ ಮಾತನಾಡಿದ್ದೇನೆ ಹೊರತು, ಯಾರಿಗೂ ಅಪಮಾನ ಮಾಡುವುದಕ್ಕೆ ಅಲ್ಲ. ಮಕ್ಕಳ ಕಣ್ಣೀರು ನನ್ನ ಸಿಟ್ಟಿಗೆ ಕಾರಣವಾಯಿತು ಎಂದು ಮತ್ತೊಮ್ಮೆ ಸ್ಪಷ್ಟಪಡಿಸುತ್ತೇನೆ. 3/3
ನಿನ್ನೆಯ ದಿನ ಶ್ರೀನಿವಾಸಪುರ ವಿಧಾನಸಭೆ ಕ್ಷೇತ್ರದ ಬಂಗವಾದಿ ಗ್ರಾಮದಲ್ಲಿ ಶಿಥಿಲಾವಸ್ಥೆಯಲ್ಲಿದ್ದ ಶಾಲೆ ಕಂಡು ನನಗೆ ಬಹಳ ಬೇಸರವಾಗಿತ್ತು. ಮಕ್ಕಳು 2-3 ವರ್ಷದಿಂದ ಎದುರಿನ ಅಶ್ವತ್ಥಕಟ್ಟೆ ಮೇಲೆ ಪಾಠ ಕೇಳುತ್ತಿದ್ದರು ಎಂದು ಕೇಳಿ ನನ್ನಲ್ಲಿ ಆಕ್ರೋಶ ಉಂಟಾಗಿತ್ತು. 2/3
ಮಾಜಿ ಸ್ಪೀಕರ್ ಶ್ರೀ ರಮೇಶ್ ಕುಮಾರ್ ಬಗ್ಗೆ ನಾನು ಬಳಸಿದೆ ಎನ್ನಲಾದ ಪದ ಸ್ವತಃ ನನಗೂ ನೋವುಂಟು ಮಾಡಿದೆ. ಆ ಪದ ಬಳಕೆ ನನ್ನ ಜಾಯಮಾನವಲ್ಲ, ನನ್ನ ವ್ಯಕ್ತಿತ್ವವೂ ಅಲ್ಲ. ಈ ಮಾತಿನಿಂದ ರಮೇಶ್ ಕುಮಾರ್ ಅವರಿಗಾಗಲಿ, ಇನ್ನಾರಿಗೆ ಆಗಲಿ ನೋವಾಗಿದ್ದರೆ ನನ್ನ ವಿಷಾದವಿದೆ. ಆ ಮಾತನ್ನು ಹಿಂಪಡೆಯುತ್ತೇನೆ.1/3
ಪಂಚರತ್ನ ರಥಯಾತ್ರೆ ಇಂದು ಚಿಕ್ಕಬಳ್ಳಾಪುರ ಜಿಲ್ಲೆಯನ್ನು ಪ್ರವೇಶಿಸಲಿದೆ. ಪರಮ ಪುಣ್ಯಕ್ಷೇತ್ರ ಕೈವಾರದಲ್ಲಿ ಪರಮಪೂಜ್ಯ ಶ್ರೀ ಶ್ರೀ ಶ್ರೀ ಯೋಗಿ ನಾರೇಯಣ ಯತೀಂದ್ರರ ಸನ್ನಿಧಿಯಲ್ಲಿ ಪೂಜೆ, ಪ್ರಾರ್ಥನೆ ಸಲ್ಲಿಸಿದ ನಂತರ ಯಾತ್ರೆ ಆರಂಭ.
#ಪಂಚರತ್ನ_ರಥಯಾತ್ರೆ#Pancharatna_Rathayatre#ಚಿಕ್ಕಬಳ್ಳಾಪುರ
ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಪಟ್ಟಣದಲ್ಲಿ ರಾತ್ರಿವರೆಗೂ ರೋಡ್ ಶೋ ನಡೆಸಲಾಯಿತು. ಜನತೆ ತೋರಿದ ವಿಶ್ವಾಸ, ಬೆಂಬಲಕ್ಕೆ ನಾನು ಸದಾ ಕೃತಜ್ಞ. ಪಂಚರತ್ನ ಯೋಜನೆಗಳ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದೇನೆ.
#ಪಂಚರತ್ನ_ರಥಯಾತ್ರೆ#Pancharatna_Rathayatre#ಕೋಲಾರ
ಅಭ್ಯರ್ಥಿ ಶ್ರೀ ಜಿ.ಕೆ.ವೆಂಕಟಶಿವಾರೆಡ್ಡಿ, ಪಕ್ಷದ ಯುವ ಘಟಕದ ಅಧ್ಯಕ್ಷ ಶ್ರೀ ನಿಖಿಲ್ ಕುಮಾರಸ್ವಾಮಿ, ವಿಧಾನ ಪರಿಷತ್ ಮಾಜಿ ಸದಸ್ಯ ಶ್ರೀ ಚೌಡರೆಡ್ಡಿ ತೂಪಲ್ಲಿ ಮತ್ತಿತರರು ಹಾಜರಿದ್ದರು.
#ಪಂಚರತ್ನ_ರಥಯಾತ್ರೆ#Pancharatna_Rathayatre#ಕೋಲಾರ
ರಾಜ್ಯ ಯುವ ಅಧ್ಯಕ್ಷ ಶ್ರೀ ನಿಖಿಲ್ ಕುಮಾರಸ್ವಾಮಿ, ಕ್ಷೇತ್ರದ ಅಭ್ಯರ್ಥಿ ಶ್ರೀ ವೆಂಕಟಶಿವಾರೆಡ್ಡಿ, ವಿಧಾನಪರಿಷತ್ ಸದಸ್ಯ ಶ್ರೀ ಗೋವಿಂದರಾಜು, ಶ್ರೀ ಚೌಡರೆಡ್ಡಿ ತೂಪಲ್ಲಿ ಇದ್ದರು.,1/2
ಅಲ್ಲದೆ; ಕೋಲಾರ ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಿಗೆ ಕರೆ ಮಾಡಿ, ಕೂಡಲೇ ಬಂಗವಾದಿ ಶಾಲೆಗೆ ಹೊಸ ಕಟ್ಟಡ ಕಟ್ಟಿಸಿಕೊಡಬೇಕಾಗಿ ಸೂಚಿಸಿದ್ದೇನೆ.4/4
#ಪಂಚರತ್ನ_ರಥಯಾತ್ರೆ#Pancharatna_Rathayatre
ಹಠ ಬಿಡದೇ ನನ್ನನ್ನು ಆ ಶಿಥಿಲವಾಗಿರುವ ಶಾಲೆಗೆ ಕರೆದುಕೊಂಡು ಹೋಗಿ, ಅಲ್ಲಿನ ದುಸ್ಥಿತಿಯ ದರ್ಶನ ಮಾಡಿಸಿದರು. ಕಳೆದ ಎರಡುಮೂರು ವರ್ಷಗಳಿಂದ ಎದುರಿನ ಅಶ್ವತ್ಥಕಟ್ಟೆ ಮೇಲೆ ಶಿಕ್ಷಕರು ಪಾಠ ಮಾಡುತ್ತಿದ್ದಾರೆ ಎಂದು ಹೇಳುತ್ತಾ ಕಣ್ಣೀರು ಹಾಕಿದರು.2/4
#ಪಂಚರತ್ನ_ರಥಯಾತ್ರೆ#Pancharatna_Rathayatre#ಕೋಲಾರ
ಪಂಚರತ್ನ ರಥಯಾತ್ರೆ ವೇಳೆ ಎದುರಾದ ಈ ಘಟನೆಯಿಂದ ನನಗೆ ಬಹಳ ನೋವಾಗಿದೆ. ಯಾತ್ರೆಯು ಶ್ರೀನಿವಾಸಪುರ ವಿಧಾನಸಭೆ ಕ್ಷೇತ್ರದಲ್ಲಿ ಸಾಗುವಾಗ ಬಂಗವಾದಿ ಗ್ರಾಮದ ಸರಕಾರಿ ಶಾಲೆ ಮಕ್ಕಳು ಶಾಲಾ ಕಟ್ಟಡಕ್ಕಾಗಿ ಕಣ್ಣೀರಿಟ್ಟರು, ರಸ್ತೆಯಲ್ಲಿ ಅಡ್ಡಗಟ್ಟಿದರು.1/4
#ಪಂಚರತ್ನ_ರಥಯಾತ್ರೆ#Pancharatna_Rathayatre#ಕೋಲಾರ
ಕೋಲಾರ ಜಿಲ್ಲೆಯ ಮದನೂರು ಕ್ರಾಸ್ ಬಳಿ ಪಂಚರತ್ನ ರಥಯಾತ್ರೆಗೆ ವ್ಯಕ್ತವಾದ ಜನ ಬೆಂಬಲ.
ಪಂಚರತ್ನಗಳು ರಾಜ್ಯದ ಸಮಗ್ರ ಅಭಿೃದ್ಧಿಗಾಗಿ ನಾನು ರೂಪಿಸಿರುವ ಮಹತ್ವಾಕಾಂಕ್ಷಿ ಯೋಜನೆ ಎಂದು ಜನತೆಗೆ ಮನದಟ್ಟು ಮಾಡಿದೆ.
#ಪಂಚರತ್ನ_ರಥಯಾತ್ರೆ#Pancharatna_Rathayatre#ಕೋಲಾರ
ಪಂಚರತ್ನ ರಥಯಾತ್ರೆಯು ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಕ್ಷೇತ್ರಕ್ಕೆ ಸಾಗುವ ಮಾರ್ಗದ ನಡುವೆ ತೊಟ್ಲಿಯ ಶ್ರೀ ಶಾಂತಿನಿಕೇತನ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಗೆ ಭೇಟಿ ನೀಡಿ ಮಕ್ಕಳ ಜತೆ ಸಂವಾದ ನಡೆಸಿದೆ.
#ಪಂಚರತ್ನ_ರಥಯಾತ್ರೆ#Pancharatna_Rathayatre#ಕೋಲಾರ
ಕೋಲಾರ ವಿಧಾನಸಭೆ ಕ್ಷೇತ್ರದ ಕ್ಯಾಲನೂರು ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ಹೂಡುವ ಮುನ್ನ ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡಿದೆ.
ಪಂಚರತ್ನ ಯೋಜನೆಗಳ ಬಗ್ಗೆ ಜನತೆಗೆ ತಿಳಿಸಿದೆ.
#ಪಂಚರತ್ನ_ರಥಯಾತ್ರೆ#ಕೋಲಾರ
ಪಂಚರತ್ನ ರಥಯಾತ್ರೆಯ 4ನೇ ದಿನದ ನನ್ನ ಗ್ರಾಮ ವಾಸ್ತವ್ಯ ಕೋಲಾರ ವಿಧಾನಸಭೆ ಕ್ಷೇತ್ರದ ಕ್ಯಾಲನೂರು ಗ್ರಾಮದಲ್ಲಿ.
ಸುಮಾರು 35ಕ್ಕೂ ಹೆಚ್ಚು ಗ್ರಾಮಗಳ ಯಾತ್ರೆ ಮುಗಿಸಿಕೊಂಡು ಬಂದಾಗ ಮಹಾಜನತೆ ನನ್ನನ್ನು ಬರಮಾಡಿಕೊಂಡ ಪರಿ ಇದು.
ಸೋನೆ ಮಳೆ, ಚಳಿಯನ್ನು ಲೆಕ್ಕಿಸದೆ ನನಗಾಗಿ ಕಾದಿದ್ದ ಜನತೆಗೆ ಕೃತಜ್ಞತೆಗಳು.
#ಪಂಚರತ್ನ_ರಥಯಾತ್ರೆ#ಕೋಲಾರ
ಪಂಚರತ್ನ ರಥಯಾತ್ರೆಯಲ್ಲಿ ಮಕ್ಕಳ ಜತೆ ಸಂವಾದ ನಡೆಸಿ ಅವರ ವಿದ್ಯಾಭ್ಯಾಸದ ಬಗ್ಗೆ ಮಾಹಿತಿ ಪಡೆದುಕೊಂಡೆ. ಶಾಲೆಯ ಸೌಲಭ್ಯಗಳು, ಬಸ್ ವ್ಯವಸ್ಥೆ ಮತ್ತಿತರೆ ಅಂಶಗಳ ಬಗ್ಗೆ ಕೇಳಿ ತಿಳಿದುಕೊಂಡೆ.
ಪಂಚರತ್ನ ಯೋಜನೆಗಳಲ್ಲಿ ಉಚಿತ ಶಿಕ್ಷಣವು ಒಂದು. ಮಕ್ಕಳಿಗೆ ಆ ವಿಷಯ ತಿಳಿಸಿದೆ.
#ಪಂಚರತ್ನ_ರಥಯಾತ್ರೆ#ಕೋಲಾರ#Pancharatna_Rathayatre
ಸರ್ವ ಜನಾಂಗದ ಶಾಂತಿಯ ತೋಟ ನಿರ್ಮಾಣಕ್ಕೆ ನಾವೆಲ್ಲರೂ ಹೋರಾಟ ನಡೆಸಬೇಕು. ಒಟ್ಟಾಗಿ ಬದುಕು ಕಟ್ಟಿಕೊಂಡು ನಾಡನ್ನು ಶಾಂತಿ, ಸೌಹಾರ್ದತೆಯೊಂದಿಗೆ ಮರು ನಿರ್ಮಾಣ ಮಾಡೋಣ ಎಂದು ಈ ಸಂದರ್ಭದಲ್ಲಿ ಕರೆ ನೀಡಿದೆ.2/2
#ಪಂಚರತ್ನ_ರಥಯಾತ್ರೆ#ಕೋಲಾರ#Pancharatna_Rathayatre