ಕನ್ನಡ ಭಾಷಾ ತಂತ್ರಜ್ಞಾನ ಸಂ‍ಶೋಧನೆ ಹಾಗೂ ಅಧ್ಯಯನ ವೇದಿಕೆ‍‍‍

'ಸಂಚಯ' ವಾಣಿಜ್ಯ ಆಸಕ್ತಿ ಅಥವಾ ಲಾಭದ ಉದ್ದೇಶವಿಲ್ಲದೆ ಕನ್ನಡ ಸಾಹಿತ್ಯ ಸಂಶೋಧನೆಯ ತಾಂತ್ರಿಕ ಸಾಮರ್ಥ್ಯವನ್ನು ವರ್ಧಿಸುವುದಕ್ಕಾಗಿ ಕಾರ್ಯನಿರತವಾಗಿದೆ.‍

ಕನ್ನಡ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವ ಉದ್ದೇಶದಿಂದ ಹುಟ್ಟಿಕೊಂಡದ್ದು ‘ಸಂಚಯ’. ತಂತ್ರಜ್ಞಾನವನ್ನು ಭಾಷೆ ಮತ್ತು ಸಾಹಿತ್ಯಿಕ ಸಂಶೋಧನೆಗಳಿಗೆ ಬಳಸುವ ಸಾಧ್ಯತೆಯನ್ನು ‘ಸಂಚಯ’ ಶೋಧಿಸುತ್ತಿದೆ. ಹೆಚ್ಚು ಜನರನ್ನು ಒಳಗೊಳ್ಳಲು ಸಾಧ್ಯವಿರುವ, ಹೆಚ್ಚು ಜನರು ಬಳಸುವ ಅವಕಾಶವನ್ನು ತೆರೆಯುವ ಅಂತರಜಾಲ ಮತ್ತು ಮೊಬೈಲ್ ವೇದಿಕೆಗಳಲ್ಲಿ ಸಂಚಯ ರೂಪಿಸಿರುವ ‘ವಚನ ಸಂಚಯ’ದಂತಹ ಪರಿಕರಗಳು ಲಭ್ಯವಿವೆ. ಇದೇ ಬಗೆಯ ಇನ್ನಷ್ಟು ಕನಸುಗಳು ನಮ್ಮವು. ಸಾಹಿತ್ಯಿಕ ಮತ್ತು ತಾಂತ್ರಿಕ ಜ್ಞಾನಗಳನ್ನು ಬೆಸೆಯುವ ಯೋಜನೆಗಳೆಲ್ಲವೂ ಮುಕ್ತ ತಂತ್ರಾಂಶದ ಮೂಲಕ ಮುಕ್ತ ಮಾಹಿತಿ ಮತ್ತು ಮುಕ್ತ ಜ್ಞಾನದ ವಾತಾವರಣವೊಂದನ್ನು ರೂಪಿಸುವ ಆದರ್ಶವನ್ನು ಬುನಾದಿಯಾಗಿಟ್ಟುಕೊಂಡಿವೆ.

ಸಾಹಿತ್ಯ

ಕನ್ನಡ, ದ್ರಾವಿಡ ಭಾಷಾ ಬಳಗದ ಎರಡನೆ ಅತಿ ಹಳೆಯ ಭಾಷೆಯಾಗಿದ್ದು, ೯ ನೇ ಶತಮಾನದ ಅಮೋಘವರ್ಷ ನೃಪತುಂಗನ ಕವಿರಾಜಮಾರ್ಗದಿಂದ ಪ್ರಾರಂಭವಾಗಿ ಇದುವರೆಗಿನ ಸಾಹಿತ್ಯ ಪ್ರಕಾರಗಳಲ್ಲಿರುವ ರಸದೌತಣವನ್ನು ಕನ್ನಡಿಗರಿಗೆ ಅಂತರ್ಜಾಲದ ಮೂಲಕ ಒದಗಿಸುವುದು ನಮ್ಮ ಉದ್ದೇಶ.

ಸಂಶೋಧನೆ

ಕನ್ನಡದ ಭಾಷಾ ಸಂಶೋಧನೆಗೆ ಅತಿ ಮುಖ್ಯವಾದ ವೇದಿಕೆಯ ಸೃಷ್ಟಿ ‘ಕನ್ನಡ ಸಂಚಯ’ದ ಮುಖ್ಯ ಗುರಿ. ಸಾಮಾನ್ಯನಿಂದ ಹಿಡಿದು, ವಿದ್ಯಾರ್ಥಿಗಳು, ಭಾಷಾ ಸಂಶೋಧಕರು, ವಿಜ್ಞಾನಿಗಳು ಇದರ ಉಪಯೋಗ ಪಡೆಯಲೆಂದು ಆಶಿಸುತ್ತೇವೆ. ಸಂಶೋಧನೆಯ ಅವಕಾಶವನ್ನು ಎಲ್ಲರಿಗೂ ಮುಕ್ತವಾಗಿ ಲಭ್ಯವಿದೆ.

ಅಧ್ಯಯನ

ಸಾಹಿತ್ಯ ಆಸಕ್ತರಿಗೆ ಯಾವುದೇ ಅಡೆತಡೆಗಳಿಲ್ಲದೆ, ಅಧ್ಯಯನಕ್ಕೆ ಕನ್ನಡ ಸಾಹಿತ್ಯ ಲೋಕದಿಂದ ಸಾಧ್ಯವಾದದ್ದನ್ನೇಲ್ಲಾ ಕನ್ನಡಿಗರಿಗಾಗಿ ತೆರೆದಿಡುವ ಸಾಧ್ಯತೆಯನ್ನು ಹುಡುಕುವ ಪ್ರಯತ್ನದಲ್ಲಿದ್ದೇವೆ. ನಿಮಗೆ ಇದು ತಲುಪುತ್ತಿದ್ದಲ್ಲಿ ನಮ್ಮ ಕಾರ್ಯ ಸಾರ್ಥಕ. ಇಲ್ಲವಾದಲ್ಲಿ ನಿಮ್ಮ ನೆನಪು ನಮಗೆ ಅಗತ್ಯ.

ಸಮುದಾಯ

ಸಮಾನ ಮನಸ್ಕರ, ಸಾಹಿತ್ಯಾಸಕ್ತರ, ವಿದ್ಯಾರ್ಥಿ, ತಾಂತ್ರಿಕ ಬಳಗ ಎಲ್ಲರ ಒಗ್ಗಟ್ಟಿನ ಕೆಲಸ ಮಾತ್ರ ನಾಳಿನ ಕನ್ನಡ ಭಾಷಾ ತಂತ್ರಜ್ಞಾನದ ಅವಶ್ಯಕತೆಗಳನ್ನು ಪೂರೈಸಬಲ್ಲದು. ನಮ್ಮ ಯೋಜನೆಗಳ ಸುತ್ತ ಇಂತಹ ಸಮುದಾಯಗಳು ರೂಪುಗೊಳ್ಳಲು ಬೇಕಾದ ವೇದಿಕೆಗಳನ್ನು ಸೃಷ್ಟಿಸುವ ಮೂಲಕ ಸಂವಹನೆಗೆ ದಾರಿ ಮಾಡಿಕೊಡಲಾಗುತ್ತಿದೆ.

ಲೇಖಕಿ ಎ. ಪಿ. ಮಾಲತಿ ಅವರ ಎಲ್ಲ ಪುಸ್ತಕಗಳೂ ಡಿಜಿಟಲ್ ರೂಪದಲ್ಲಿ

ಲೇಖಕಿ ಎ. ಪಿ. ಮಾಲತಿ ಅವರ ಎಲ್ಲ ಪುಸ್ತಕಗಳನ್ನು ನಮ್ಮ ಸಂಚಯದ‍ ಪುಸ್ತಕಗಳ ಡಿಜಿಟಲೀಕರಣದ ಯೋಜನೆ ಅಡಿಯಲ್ಲಿ ಡಿಜಿಟಲೀಕರಿಸಿದ್ದೇವೆಂದು ತಿಳಿಸಲು ಹರ್ಷಿಸುತ್ತೇವೆ. ‍‍ಪುಸ್ತಕಗಳು ಆರ್ಕೈವ್ ಡಾಟ್ ಆರ್ಗ್‌ನಲ್ಲಿ ದೊರೆಯುತ್ತವೆ. ‌#kannada #digitization #books #apmalathi ಪುಸ್ತಕಗಳ...

read more

ನಗುವ ನಂದ – ೧೯೫೦ರ ದಶಕದ ಬಿ. ರಂಗನಾಥರಾವ್ ಸಂಪಾದಕತ್ವದ ವಾರ ಪತ್ರಿಕೆ

೧೯೫೦ರ ದಶಕದಲ್ಲಿ ಬಿ. ರಂಗನಾಥರಾವ್ ಸಂಪಾದಕತ್ವದಲ್ಲಿ, ಸುಭೋಧ ಪ್ರಕಟಣಾಲಯದ ಮೂಲಕ ಪ್ರಕಟಗೊಳ್ಳುತ್ತಿದ್ದ ವಾರಪತ್ರಿಕೆ ನಗುವ ನಂದ ಈಗ ಡಿಜಿಟಲ್ ರೂಪದಲ್ಲಿ. #kannada #digitization #kannadaweeklyಇಲ್ಲ್ಲಿಓದಿ: http://bit.ly/naguva-nanda-sanchaya ಬಿ. ರಂಗನಾಥರಾವ್ ಅವರ ಕುಟುಂಬಕ್ಕೂ, ಛಾಯ...

read more

ಸಂವಾದ ಪತ್ರಿಕೆ – ಈಗ ಡಿಜಿಟಲ್ ರೂಪದಲ್ಲಿ

‘ಸಂವಾದ’ ಈಗ ಡಿಜಿಟಲ್ ರೂಪದಲ್ಲಿ ನಿಮ್ಮ ಮುಂದೆ. ಈ ಕಾರ್ಯ ನಿರಂತರ - ನಿಮ್ಮ ಬೆಂಬಲ ಸಹಕಾರವೂ ನಿರಂತರವಾಗಿರಲಿ. ಸಂವಾದ ಪತ್ರಿಕೆಯ ಡಿಜಿಟಲೀಕರಣಕ್ಕೆ ಅನುಮತಿ ನೀಡಿದ ರಾಘವೇಂದ್ರ ಪಾಟೀಲರಿಗೂ, ಸಂಚಿಕೆಗಳನ್ನು ಒದಗಿಸಿದ ಋತುಮಾನದ Kuntady Nithesh (ಕುಂಟಾಡಿ ನಿತೇಶ್)‌ ‌ ಅವರಿಗೂ ವಿಶೇಷ ಧನ್ಯವಾದಗಳು. ಸಂವಾದ...

read more

ಸಂಚಯ – ಕನ್ನಡ ಸಾಹಿತ್ಯ, ಸಾಂಸ್ಕೃತಿಕ ಪತ್ರಿಕೆ ಈಗ ಡಿಜಿಟಲ್ ರೂಪದಲ್ಲಿ

ಸಂಚಯ - ಕನ್ನಡ ಸಾಹಿತ್ಯ, ಸಾಂಸ್ಕೃತಿಕ ಪತ್ರಿಕೆ ಈಗ ಡಿಜಿಟಲ್ ರೂಪದಲ್ಲಿ - ನಮ್ಮ ಸಂಚಯದ ಕನ್ನಡ ಪುಸ್ತಕಗಳ ಡಿಜಿಟಲೀಕರಣ ಯೋಜನೆ ಅಡಿ ಡಿಜಿಟಲೀಕರಣಗೊಳ್ಳುತ್ತಿದೆ. ಈ ಪತ್ರಿಕೆಯ ಡಿಜಿಟಲೀಕರಣಕ್ಕೆ ಅನುಮತಿ ನೀಡಿದ ಡಿ. ವಿ. ಪ್ರಹ್ಲಾದ್ ಅವರಿಗೂ, ಸಂಚಿಕೆಗಳನ್ನು ಒದಗಿಸಿದ ಋತುಮಾನದ ಕುಂಟಾಡಿ ನಿತೇಶ್‌ ಅವರಿಗೂ ಧನ್ಯವಾದಗಳು. ಕನ್ನಡ...

read more

ಡಾ. ಆರ್.ವಿ.ಭಂಡಾರಿಯವರ ಕೃತಿಗಳ ಡಿಜಿಟಲೀಕರಣ

ಉತ್ತರ ಕನ್ನಡದ ಚಿಂತಕ, ಸಾಹಿತಿ, ಚಳುವಳಿಗಾರ ಡಾ. ಆರ್.ವಿ.ಭಂಡಾರಿಯವರ ಕೃತಿಗಳ ಡಿಜಿಟಲ್ ರೂಪ ಈಗ ಇಂಟರ್ನೆಟ್ ಆರ್ಕೈವ್ನಲ್ಲಿ ಲಭ್ಯ. ಇವುಗಳನ್ನು ಡಿಜಿಟಲೀಕರಣಕ್ಕೆ ಒದಗಿಸಿದ ಶ್ರೀ ವಿಠಲ್ ಭಂಡಾರಿಯವರಿಗೆ ಧನ್ಯವಾದಗಳು. ಡಾ. ಆರ್.ವಿ.ಭಂಡಾರಿಯವರ ಕೃತಿಗಳನ್ನು ಇಲ್ಲಿ...

read more

Thank you Nagarathna memorial grant 2019

Nagarathna Memorial Grant helped us drive the Kannada Books digitisation project in multiple ways for which we are very thankful to Shri Thejesh GN. Here is how we are utilising the fund to make it fruitful for kannadiga's Broad Classification The funds are mainly...

read more

ಸಿದ್ಧಗಂಗಾ ತ್ರೈಮಾಸಿಕದ ಡಿಜಿಟಲೀಕರಣ

ಹಳೆಯ ವಿದ್ಯಾರ್ಥಿಗಳ ಸಂಘ, ‍ಸಿದ್ಧಗಂಗಾಕ್ಷೇತ್ರ, ತುಮಕೂರು ಪ್ರಕಟಿಸುತ್ತಾ ಬಂದಿರುವ 'ಸಿದ್ಧಗಂಗಾ' ಪತ್ರಿಕೆಯನ್ನು 'ಚನ್ನಪ್ಪ ಎರೇಸೀಮೆ ಸಂಚಯ'ದ ಡಿಜಿಟಲೀಕರಣದ ಅಂಗವಾಗಿ ಡಿಜಿಟಲೀಕರಿಸಲಾಗಿದೆ. ಇದಕ್ಕೆ ಅವಕಾಶ ಮಾಡಿಕೊಟ್ಟಾ ಸಿದ್ಧಗಂಗಾ ಶ್ರೀಗಳಾದ ಶ್ರೀ ಶ್ರೀ ಸಿದ್ಧಗಂಗಾ ಮಹಾಸ್ವಾಮಿಗಳಿಗೂ, ಈ ಕಾರ್ಯಕ್ಕೆ ಕಾರಣಕರ್ತರಾದ. ವೈ....

read more

ಶ್ರೀ ಗೌರೀಶಂಕರ ಸ್ವಾಮಿಗಳ ಸಮಗ್ರ ಸಾಹಿತ್ಯ – ಡಿಜಿಟೈಸೇಷನ್ ಕಾರ್ಯ

ಶ್ರೀ ಗೌರೀಶಂಕರ ಸ್ವಾಮಿಗಳ ಸಮಗ್ರ ಸಾಹಿತ್ಯ - ಡಿಜಿಟೈಸೇಷನ್ ಕಾರ್ಯಕ್ಕೆ ಒಪ್ಪಿಗೆ ಸೂಚಿಸಿ ‍ಜೆ.ಎಸ್.ಎಸ್ ಮಹಾವಿದ್ಯಾಪೀಠದ ಪ್ರಕಟಣಾ ವಿಭಾಗದ ಮುಖ್ಯಸ್ಥರು ಕಳುಹಿಸಿರುವ ಪತ್ರ. ಒಪ್ಪಿಗೆ ನೀಡಿದ ಶ್ರೀಗಳಿಗೂ, ಸಂಪಾದಕರಿಗೂ, ಇದಕ್ಕೆ ಕಾರಣರಾದ ಡಾ. ವೈ. ಸಿ. ಕಮಲ ಅವರಿಗೂ ಹೃತ್ಪೂರ್ವಕ ಧನ್ಯವಾದಗಳು ಅನುಮತಿ ಪತ್ರ ಪುಸ್ತಕವನ್ನು...

read more

ರುಜುವಾತು – ಈಗ CC-by-SA-NC ಅಡಿ – ಇಂಟರ್ನೆಟ್ ಆರ್ಕೈವ್‌ನಲ್ಲಿ‍

ಯು. ಆರ್. ಅನಂತಮೂರ್ತಿಯವರ ಸಾರಥ್ಯದ ‘ರುಜುವಾತು’ ಈಗ CC-by-SA-NC ಅಡಿ ಇಂಟರ್ನೆಟ್ ಆರ್ಕೈವ್‌ನಲ್ಲಿ ಲಭ್ಯವಿದೆ. ಸಂಚಯದ ಪುಸ್ತಕಗಳ ಡಿಜಿಟೈಸೇಷ್‌ನ್ ಯೋಜನೆ ಅಡಿ ಇವುಗಳನ್ನು ಡಿಜಿಟಲೀಕರಿಸಲಾಗಿದೆ. ಈ ಕಾರ್ಯವನ್ನು ಸಾಧ್ಯವಾಗಿಸಿದುದಕ್ಕೆ ‍ಸಂಚಯ, ರುಜುವಾತು ಟ್ರಸ್ಟ್ ಹಾಗು ಶ್ರೀ ವಿವೇಕ್ ಶಾನುಭಾಗ್ ಅವ‍ರಿಗೆ ಈ ಮೂಲಕ...

read more

ಗೋಪಾಲಕೃಷ್ಣ ಅಡಿಗರ ಸಂಪಾದಕತ್ವದ – ಸಾಕ್ಷಿ – ಈಗ ಇಂಟರ್ನೆಟ್ ಆರ್ಕೈವ್‌ನಲ್ಲಿ

ಗೋಪಾಲಕೃಷ್ಣ ಅಡಿಗರ ಸಂಪಾದಕತ್ವದ - ಸಾಕ್ಷಿ - ಈಗ ಇಂಟರ್ನೆಟ್ ಆರ್ಕೈವ್‌ನಲ್ಲಿ‍ ಲಭ್ಯ. ‍ ‍ಸಾಕ್ಷಿಯ ಮೂಲ ರೂಪವನ್ನು ನಮ್ಮ ಕೈಗೆಟುಕಿದ ಸಂಚಿಕೆಗಳ ಡಿಜಿಟಲೀಕರಣದ ಮೂಲಕ ನಿಮ್ಮೆಲ್ಲರ ಮುಂದೆ ಇಡುತ್ತಿದ್ದೇವೆ. ರಾಜೇಂದ್ರ‍ ಪ್ರಸಾದ್ ಇದನ್ನು ಸಾಧ್ಯವಾಗಿಸಿದ್ದು, ಶ್ರೀ ಜಯರಾಮ ಆಡಿಗರು ಇದಕ್ಕೆ ಉಳಿದ ಸಂಚಿಕೆಗಳನ್ನು ಸೇರಿಸಲು...

read more

ನಿಮ್ಮ ಸಹಾಯವನ್ನು ನಾವು ಹೇಗೆ ಬಳಸುತ್ತೇವೆ?

ಮಾಹಿತಿ ಪುಟನಿಮ್ಮ ಸಹಾಯವನ್ನು ನಾವು ಹೇಗೆ ಬಳಸುತ್ತಿದ್ದೇವೆ?ನಾಗರತ್ನ ಸ್ಮಾರಕ ಅನುದಾನ ‍೨೦೧೯ ಅನುದಾನವನ್ನು ಈ ಕೆಳಗಿನ ಕಾರ್ಯಗಳಿಗೆ ಬಳಸಿಕೊ‌ಳ್ಳಲಾಗುತ್ತಿದೆ. ಪುಸ್ತಕಗಳ ಡಿಜಿಟಲೀಕರಣಡಿಜಿಟಲೀಕರಣದ ಓಡಾಟ, ಕೊರಿಯರ್/‌ಅಂಚೆ ಖರ್ಚುಗಳು ಡಿಜಿಟಲೀಕರಣಕ್ಕೆ ಬಂದ ಪುಸ್ತಕಗಳನ್ನು ಜತನದಿಂದ ಕಾಯ್ದುಕೊಳ್ಳಲು ಪಾಲಿಎಥಲೀನ್ ಕವರ್...

read more

ಡಿಜಿಟೈಸೇಷನ್ ಯೋಜನೆಗೆ ನೀವು ಹೇಗೆ ಸಹಕರಿಸಬಹುದು?

‍ಡಿಜಿಟೈಸೇಷನ್ ಯೋಜನೆಗೆ ಎಲ್ಲರೂ ಒಂದಲ್ಲಾ ಒಂದು ರೀತಿ ಸಹಕರಿಸಬಹುದು. ಇದನ್ನು ಈ ಕೆಳಗಿನ ಚಿತ್ರ ಸುಲಭವಾಗಿ ವಿವರಿಸುತ್ತದೆ. ‍ಜೊತೆಗೆ ಈ ಕೆಳಗಿನ ಪಟ್ಟಿಯೂ ನಿಮಗೆ ಸಾಧ್ಯವಾಗುವ ಒಂದು ಕೆಲಸವನ್ನು ಸುಲಭವಾಗಿ ಸೂಚಿಸಬಹುದು.  ನಿಮ್ಮಲ್ಲಿರುವ ಹಳೆಯ ಪುಸ್ತಕಗಳನ್ನು ಹಂಚಿಕೊಳ್ಳುವುದು ‍ನಿಮ್ಮ ಸಂಪರ್ಕದಲ್ಲಿರುವ ವ್ಯಕ್ತಿ ಅಥವಾ...

read more

‍ವಚನ ಸಂಚಯದಲ್ಲೀಗ Annotation ಸಲಕರಣೆಯನ್ನು ಲಭ್ಯವಾಗಿಸಲಾಗಿದೆ

‍‍‍ವಚನ ಸಾಹಿತ್ಯ ಅಭ್ಯಸಿಸುವವರಿಗೆ ಸಂಚಯದಿಂದ ‍ಹೊಸ ಸಲಕರಣೆ. ವಚನ ಸಂಚಯದಲ್ಲಿನ ಪಠ್ಯ‍ಗಳನ್ನು ನಿಮಗೆ ಅವಶ್ಯವಿದ್ದಂತೆ ‍Annotate/ಟಿಪ್ಪಣಿ ಮಾಡಿಕೊಳ್ಳುವ ಅವಕಾಶ. ಜೊತೆಗೆ ವಚನಗಳನ್ನು ಸಾರ್ವಜನಿಕವಾಗಿ ಟ್ಯಾಗ್/ವರ್ಗೀಕರಣ ಮಾಡಬಹುದು. HypothesisTB Dinesh Thank you ‍ಧನ್ಯವಾದಗಳು.... ಬಳಸುವ ಬಗೆ: ನಿಮ್ಮ ಇಚ್ಚೆಯ ವಚನದ...

read more

ಪದ ಸಂಚಯ – ಕನ್ನಡ ಪದದ ಸುತ್ತ

‍‍‍ಕನ್ನಡ ನಿಘಂಟುಗಳನ್ನು ಕಂಪ್ಯೂಟರ್‌ನಲ್ಲಿ ನಮ್ಮ ಅವಶ್ಯತೆಗೆ ತಕ್ಕಂತೆ ಬಳಸಿಕೊಳ್ಳುವ ಅವಶ್ಯಕತೆ ಬಹಳಷ್ಟಿದೆ. ಆದರೆ, ಇದುವರೆಗೂ ಕನ್ನಡದಲ್ಲಿ ಲಭ್ಯವಿರುವ ನಿಘಂಟುಗಳು ಮುಕ್ತವಾಗಿ ಲಭ್ಯವಿಲ್ಲ. ಜೊತೆಗೆ ಪದ, ಪದದ ಅರ್ಥ, ವಿವರಣೆ, ನಾಮಪದ, ಕ್ರಿಯಾಪದ ಹಾಗೂ ಮತ್ತಷ್ಟು ಮಾಹಿತಿ ಹೊರತುಪಡಿಸಿ ಹೆಚ್ಚಿನದನ್ನೇನೂ ಪಡೆದುಕೊಳ್ಳಲು...

read more